KAVI CHAITHANYAKKE KAVYA NAMANA (DESHA BHAKTI SARUVA KAVANA SANKALANA)
-
TypePrint
- CategoryNon-Academic
- Sub CategoryFiction
- StreamPoetry-Fiction
ಜನ ಸೇವೆಯೆ ಜನಾರ್ದನ ಸೇವೆ. ಮಾನವ ಸೇವೆಯೆ ಮಾಧವ ಸೇವೆ, ದೇಶ ಸೇವೆಯೆ ಈಶ ಸೇವೆ. ಯಾರಿಗೆ ದೇಶದ ಬಗ್ಗೆ ಜ್ಞಾನ ಜಾಗೃತಿ ಆಗಿದೆಯೋ ಅಂತಹ ವ್ಯಕ್ತಿಯ ದೇಹ. ಮನಸ್ಸು, ಹೃದಯ, ಬುದ್ದಿ ಎಲ್ಲವೂ ಅವನನ್ನು ಸಾರ್ಥಕ ಬದುಕಿಗೆ ಹೆಜ್ಜೆ ಹಾಕುವಂತೆ ಮಾಡುತ್ತದೆ. ಸಾಮಾನ್ಯವಾಗಿ ವಿಜ್ಞಾನ ಬುದ್ಧಿ, ತತ್ವಜ್ಞಾನಿ ಮನಸು, ಕವಿ ಹೃದಯ ಜಾಗೃತಿಯಾದಾಗ ಕವನ ಬರೆಯುವುದು, ಕವನ ಓದುವುದು. ಕಾದಂಬರಿ ಓದುವುದು. ಕಥೆ ಓದುವುದು, ಕಥೆ ಬರೆಯುವುದು. ಈ ರೀತಿಯ ಆಸಕ್ತಿಗಳು ಹೆಚ್ಚಾಗುತ್ತವೆ. ಕವಿಯಾಗ ಬಯಸುವವರಿಗೆ ವಿನಯ, ವಿಸ್ಮಯ, ವೈಖರಿ ಎಂಬ ಮೂರು ಗುಣಗಳು ಇರಲೇ ಬೇಕು. ಆಗ ಮಾತ್ರ ಅವರು ಉತ್ತಮ ಕವಿಯಾಗುತ್ತಾರೆ ಹಾಗೂ ನಿಜವಾದ ಕವಿಗೆ ಯಾವುದೇ ಜಾತಿಯ ವಾಸನೆ ಅಂಟಿರಬಾರದು ಮತ್ತು ಅವರ ಕವಿತೆಗೆ ಜಾತಿಯ ಸಂಕೋಲೆ ಸುಳಿಯಲೇಬಾರದು. ದಿನಕರ ದೇಸಾಯಿಯವರು (ಚುಟುಕು ಕವಿ) ಹೇಳಿದಂತೆ ದೊಡ್ಡ ಮನಸಿನ ಕುದುರೆ ಹತ್ತಿ, ಕೈಯಲ್ಲಿ ಹಿಡಿಯಿರಿ ಧೈರ್ಯದ ಕತ್ತಿ, ವಿಶ್ವ ಧರ್ಮದ ರೂಮಾಲು ಸುತ್ತಿ, ಆತ್ಮ ಸಂಯಮದ ಲಗಾಮು ಒತ್ತುವವನೇ ನಿಜವಾದ ಕವಿ. ಅಂತಹವನ ಕವಿತೆಯಲ್ಲಿ ಮಾತ್ರ ಸಮತ್ವ ಕಾಣಲು ಸಾಧ್ಯ. ರಾಷ್ಟ್ರ ಕವಿ ಕುವೆಂಪುರವರು ಹೇಳುವಂತೆ ನಮ್ಮ ದೇಶ ಒಂದು ಸಂಸ್ಕೃತಿಯ ದೇಶವಲ್ಲ, ಹಾಗೆಂದು ಹಲವು ಸಂಸ್ಕೃತಿಯ ದೇಶವೂ ಅಲ್ಲ, ಹಲವು ಸಂಸ್ಕೃತಿಗಳನ್ನೊಳಗೊಂಡ ಒಂದು ದೇಶ. ಉದಾಹರಣೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಿ, ಹಿಂದಿ, ಪಂಜಾಬಿ, ಮರಾಠಿ, ಉರ್ದು ಭಾಷೆಗಳನ್ನು ಮಾತನಾಡುವ ಎಲ್ಲರೂ ಸೇರಿದರೆ ಭಾರತ ಮಂದಿ ಅಲ್ಲವೇ? ಇಂತಹ ರಾಷ್ಟ್ರೀಯ ಮನೋಭಾವ ಯಾರು ಅನುಸರಿಸುತ್ತಾರೋ ಅವರೇ ದೇಶ ಭಕ್ತರು. ಈ ಆಲೋಚನೆಯಿಂದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿರುವ ನಿಮಗೆಲ್ಲರಿಗೂ ಅಭಿನಂದನೆಗಳು. ಐಕ್ಯ ಒಂದೇ ಮಂತ್ರ, ಐಕ್ಯದಿಂದ ಸ್ವತಂತ್ರ, ಐಕ್ಯ ಗಾನದಿ ರಾಷ್ಟ್ರ ಜೀವನ ತೇಲುತಿರಲಿ. ನಿಮ್ಮ ಪ್ರಯತ್ನ ನಿಜವಾಗಿಯೂ ಸ್ತುತ್ಯರ್ಹವಾದದ್ದು. ವರ್ಧಿಸಲಿ. ಅಭಿವೃದ್ಧಿಸಲಿ.
**Note: IIP Store is the best place to buy books published by Iterative International Publishers. Price at IIP Store is always less than Amazon, Amazon Kindle, and Flipkart.
COMMENTS
No Review found for book with Book title. KAVI CHAITHANYAKKE KAVYA NAMANA (DESHA BHAKTI SARUVA KAVANA SANKALANA)